INFO Breaking
Live
wb_sunny

Breaking News

ಮಹದೇವ ಸಾವಕಾರ್ ಬೈರಕೊಂಡ ಆಪ್ತನ ಮೇಲೆ ಫೈರಿಂಗ್..! Vijayapur

ಮಹದೇವ ಸಾವಕಾರ್ ಬೈರಕೊಂಡ ಆಪ್ತನ ಮೇಲೆ ಫೈರಿಂಗ್..! Vijayapur

ಭೀಮಾತೀರದಲ್ಲಿ ಮತ್ತೆ ಹಾಡು ಹಗಲೇ ಗುಂಡಿನ ಶಬ್ದ ಕೇಳಿಬಂದಿದ್ದ ಜನರು ಬೆಚ್ಚಿಬಿದ್ದಿದ್ದಾರೆ.ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಫೈರಿಂಗ್ ನಡೆದಿದೆ.
ದೇವರ ನಿಂಬರಗಿ ಪಂಚಾಯತಿಯ ಅಧ್ಯಕ್ಷ ಹಾಗೂ ಮಹದೇವ ಸವಕಾರ್ ಬೈರಗೊಂಡ ಆಸ್ತ ಭೀಮನಗೌಡ ಬಿರಾದಾರ ಎಂಬಾತನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.ಭೀಮನಗೌಡ ಕಟ್ಟಿಂಗ್ ಮಾಡಿಸಿಕೊಳ್ಳುವ ವೇಳೆ ಕಣ್ಣಿಗೆ ಕಾರದ ಪುಡಿ ಎರಚಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಫೈರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ‌.ಇನ್ನೂ ವಿಜಯಪುರ ಖಾಸಗಿ ಆಸ್ಪತ್ರೆಗೆ ಭೀಮನಗೌಡನನ್ನ ರವಾನೆ ಮಾಡಲಾಗಿದೆ.ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

0 Comments:

Responsive

Ads

Here